Loading the player...


INFO:
ಪ್ರವಾಸಿಗರ ಸ್ವರ್ಗ ಲಡಾಖ್‌ ಈಗ ಹೊತ್ತಿ ಉರಿಯುತ್ತಿದೆ. ಸ್ವತಂತ್ರ ರಾಜ್ಯದ ಸ್ಥಾನಮಾನದ ಕಿಡಿ ಲಡಾಖ್‌ನಲ್ಲಿ ಹಿಂಸೆಯ ಕಿಡಿಯನ್ನು ಹೊತ್ತಿಸಿದೆ. ಪ್ರತಿಭಟನಾಕಾರರ ಬೆಂಕಿಯ ಜ್ವಾಲೆಗೆ ಲೇಹದಲ್ಲಿರುವ ಸ್ಥಳೀಯ ಬಿಜೆಪಿ ಕಚೇರಿ ಸುಟ್ಟು ಭಸ್ಮವಾಗಿದ್ದರೆ, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಯಾವ ಲಡಾಖ್‌ನ ಜನರು 2019ರಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಕ್ಕಾಗ ಸಂಭ್ರಮಿಸಿದ್ದರೋ, ಅದೇ ಜನರು ಇಂದು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ. ಸಂಪೂರ್ಣ ರಾಜ್ಯದ ಸ್ಥಾನಮಾನ ಮತ್ತು ಆರನೇ ಶೆಡ್ಯೂಲ್‌ಗೆ ಸೇರಿಸುವಂತೆ ನಡೆಯುತ್ತಿದ್ದ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ಲಡಾಖ್‌ನ ಲೇಹ್‌ನಲ್ಲಿ ದಿಢೀರ್‌ ಅಂತಾ ಪ್ರತಿಭಟನೆ ಭುಗಿಲೇಳಲು ಕಾರಣವೇನು? ಪ್ರತಿಭಟನಾಕಾರರ ಬೇಡಿಕೆಗಳು ಏನು? ಎಂಬುದನ್ನು ಡಿಟೇಲ್‌ ಆಗಿ ನೋಡೋಣ ಬನ್ನಿ
ಲಡಾಖ್‌ನಲ್ಲಿ ಪ್ರತಿಭಟನೆಯ ಬೆಂಕಿ,ಹೊತ್ತಿ ಉರಿದ ಲಡಾಖ್: ಸಂಪೂರ್ಣ ರಾಜ್ಯದ ಸ್ಥಾನಮಾನ, 6ನೇ ಶೆಡ್ಯೂಲ್‌ಗೆ ಜನರ ಪಟ್ಟು! ಬಿಜೆಪಿ ಕಚೇರಿ ಭಸ್ಮ, ಪರಿಸ್ಥಿತಿ ಉದ್ವಿಗ್ನ - statehood-protesters-clash-with-cops-in-ladakh-police-vehicle-burnt-down - vijaykarnataka