Loading the player...


INFO:
ಕರ್ನಾಟಕಕ್ಕೆ ಹೊಸ ಹೊಸ ರೈಲುಗಳ ಸೇವೆ ಹರಿದು ಬರ್ತಿದೆ. ಅದರಂತೆ ರೈಲ್ವೇ ಇಲಾಖೆ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದೆ. ಭಾರತೀಯ ರೈಲ್ವೆಯ ಹೆಮ್ಮೆಯ ಪ್ರತೀಕವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗ ನಮ್ಮ ಉತ್ತರ ಕರ್ನಾಟಕದ ಎರಡು ಪ್ರಮುಖ ಜಿಲ್ಲೆಗಳಿಂದ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸಲು ಸಜ್ಜಾಗಿದೆ. ಹೌದು.. ಪುಣೆ-ಬೆಳಗಾವಿ ಮತ್ತು ಪುಣೆ-ಕಲಬುರಗಿ-ಹೈದರಾಬಾದ್ ನಡುವೆ ಎರಡು ಹೊಚ್ಚ ಹೊಸ ವಂದೇ ಭಾರತ್ ರೈಲುಗಳ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಈ ಎರಡು ರೈಲುಗಳು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲ, ಬದಲಿಗೆ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಹೊಸ ಬಾಗಿಲುಗಳನ್ನು ತೆರೆಯಲಿವೆ. ಹಾಗಾದರೆ, ಈ ಹೊಸ ರೈಲುಗಳ ವಿಶೇಷತೆ ಏನು? ಯಾರಿಗೆಲ್ಲಾ ಇದರ ಲಾಭವಾಗಲಿದೆ? ಟಿಕೆಟ್ ದರ ಎಷ್ಟಿರಬಹುದು? ನೋಡೋಣ
ಉತ್ತರ ಕರ್ನಾಟಕಕ್ಕೆ ಹೊಸ ರೈಲು,ಉತ್ತರ ಕರ್ನಾಟಕಕ್ಕೆ ಡಬಲ್ ಧಮಾಕ, 2 ಹೊಸ ವಂದೇ ಭಾರತ್ ರೈಲು ಘೋಷಣೆ, ಎಲ್ಲಿಂದ ಎಲ್ಲಿಗೆ?, ಇಲ್ಲಿದೆ ಮಾಹಿತಿ - indian-railway-department-has-announced-2-new-vande- bharat-trains-for-north-karnataka - vijaykarnataka