Loading the player...


INFO:
ಚಿತ್ರದುರ್ಗದ ರೇಣುಕಾಸ್ವಾಮಿ ಕೊ.ಲೆ. ಪ್ರಕರಣದ A2 ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಗುರುವಾರ ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ನಡೆಯಲಿದೆ. ನವೆಂಬರ್‌ 26ರಂದು ದರ್ಶನ್‌ ಪರ ವಕೀಲರಾದ ಸಿವಿ ನಾಗೇಶ್‌ ಸುದೀರ್ಘವಾಗಿ ವಾದ ಮಂಡನೆ ಮಾಡಿದ್ದರು. ಚಾರ್ಜ್‌ ಶೀಟ್‌ನಲ್ಲಿರೋ ಅಂಶಗಳನ್ನು ಉಲ್ಲೇಖಿಸಿ ವಾದ ಮಂಡನೆ ಮಾಡಿದ್ದರು. ಗುರುವಾರ ಅಂದರೆ ನವೆಂಬರ್‌ 28ರಂದು ಎಸ್‌ಪಿಪಿ ಪರ ವಕೀಲರಾದ ಪ್ರಸನ್ನ ಕುಮಾರ್‌ ವಾದ ಮಂಡನೆ ಮಾಡಿದ್ದಾರೆ. ಸಿವಿ ನಾಗೇಶ್‌ ಪ್ರಶ್ನೆ ಅಂಶಗಳಿಗೆ ಇಂದು ಉತ್ತರ ನೀಡಲಿದ್ದಾರೆ. ನ್ಯಾಯಮೂರ್ತಿ ಎಸ್‌ ವಿಶ್ವಜೀತ್‌ ಶೆಟ್ಟಿಯವರು ಇರುವ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಶವ ಸಾಗಾಟ ಮಾಡಿದ್ದು, ಕಿಡ್ನಾಪ್‌ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ಸಿವಿ ನಾಗೇಶ್‌ ಉಲ್ಲೇಖಿಸಿ ಮಾತನಾಡಿದ್ದರು. ದರ್ಶನ್‌ ಪರ ವಕೀಲರು ಮಾಡಿದಂತ ವಾದಕ್ಕೆ ಪ್ರತಿವಾದವಾಗಿ ಇಂದು ಎಸ್‌ಪಿಪಿ ಪರ ವಕೀಲರಾದ ಪ್ರಸನ್ನಕುಮಾರ್‌ ಉತ್ತರಿಸಬೇಕಿದೆ.
ದರ್ಶನ್‌ ಜಾಮೀನು ಅರ್ಜಿ ವಿಚಾರಣೆ,ರೇಣುಕಾಸ್ವಾಮಿ ಹ.ತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಏನಾಯ್ತು? - kannada actor darshan thoogudeepa case bail form inquiry in karnataka high court - vijaykarnataka