Loading the player...


INFO:
ಕರ್ನಾಟಕದಲ್ಲಿ ವೈಮಾನಿಕ ಸಂಪರ್ಕವನ್ನು ವಿಸ್ತರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಹೊಸ ಹೊಸ ಏರ್‌ಪೋರ್ಟ್‌ಗಳನ್ನು ನಿರ್ಮಿಸುತ್ತಿವೆ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್‌ ನಿರ್ಮಾಣದ ಕೆಲಸಕ್ಕೂ ಕೂಡ ವೇಗ ಸಿಕ್ಕಿದೆ. ಆದರೆ, ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿವೆಯಾದರೂ ಕೂಡ ವಿಮಾನ ಸೇವೆ ಪ್ರಾರಂಭಿಸಲು ವಿಮಾನಯಾನ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂಬ ವರದಿ ಈಗ ಹೊರಬಿದ್ದಿದೆ. ಕೇಂದ್ರ ಸರ್ಕಾರವೇ ಈ ಮಾಹಿತಿ ನೀಡಿದ್ದು, ರಾಜ್ಯದ ಹಲವು ಹೊಸ ಏರ್‌ಪೋರ್ಟ್‌ಗಳಲ್ಲಿ ವೈಮಾನಿಕ ಸೇವೆ ಆರಂಭಿಸಲು ಬಿಡ್‌ ಆಹ್ವಾನಿಸಿದ್ದು, ಕೆಲವೇ ಕೆಲವು ನಿಲ್ದಾಣಗಳಿಗೆ ಮಾತ್ರ ಬಿಡ್‌ ಬಂದಿವೆ. ಮೂರು ವಿಮಾನ ನಿಲ್ದಾಣಗಳಿಗೆ ಯಾವುದೇ ಬಿಡ್‌ ಬಂದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಅದರ ಜೊತೆ ಕಲಬುರಗಿ ಹಾಗೂ ಶಿವಮೊಗ್ಗದ ವಿಮಾನ ಟ್ರಿಪ್‌ಗಳ ಮಾಹಿತಿಯನ್ನು ಕೂಡ ನಾಗರಿಕ ವಿಮಾನಯಾನ ಸಚಿವಾಲಯ ನೀಡಿದೆ.
ಕೋಲಾರ ಬಳ್ಳಾರಿಯಲ್ಲಿ ವಿಮಾನ ಸೇವೆ,ಕರ್ನಾಟಕದಲ್ಲಿ ಉಡಾನ್ ಯೋಜನೆಗೆ ವೇಗ, ಮತ್ತೆರಡು ಕಡೆ ವಿಮಾನ ಸೇವೆಗೆ ಬಿಡ್‌! ಚಿನ್ನ, ಕಬ್ಬಿಣದ ಗಣಿ ಜಿಲ್ಲೆಯ ಜನರಿಗೆ ಗುಡ್‌ನ್ಯೂಸ್‌! - udan-plan-expand-in-karnataka-2-more-airstrips-get-plane-no-bid-for-3-airports-good-news-for-kolar-ballari-people - vijaykarnataka