Loading the player...


INFO:
ಕೆಲ ದಿನಗಳ ಹಿಂದಷ್ಟೇ.. ಅಮೆರಿಕದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಪತ್ನಿ ಹಾಗೂ ಮಗನ ಕಣ್ಣೆದುರೇ ಓರ್ವ ದುಷ್ಕರ್ಮಿ ಚಂದ್ರ ನಾಗಮಲ್ಲಯ್ಯನ ತಲೆ ಕತ್ತರಿಸಿ ಕೊಲೆ ಮಾಡಿದ್ದ. ಇದು ಭಾರತ ಮಾತ್ರವಲ್ಲದೇ ಜಾಗತಿಕ ಚರ್ಚೆಗೆ ಕಾರಣವಾಗಿತ್ತು. ಈ ಬರ್ಬರ ಕೃತ್ಯ ಅಮೆರಿಕ ರಾಜಕೀಯದಲ್ಲಿಯೂ ಬಿರುಗಾಳಿ ಸೃಷ್ಟಿಸಿದ್ದು, ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೌನ ಮುರಿದಿದ್ದಾರೆ. ಅದಲ್ಲದೇ ಅಕ್ರಮ ವಲಸಿಗರ ವಿರುದ್ಧ ಟ್ರಂಪ್‌ ಸಿಡಿದಿದ್ದು, ನನ್ನ ಆಡಳಿತದಲ್ಲಿ ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದು ಧೋರಣೆ ತೋರುವ ಕಾಲ ಮುಗಿದಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕದಲ್ಲಿ ಕನ್ನಡಿಗನ ಹತ್ಯೆಗೆ ಕಾರಣ ತಿಳಿಸಿದ ಟ್ರಂಪ್‌,ಅಮೆರಿಕದಲ್ಲಿ ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ ಶಿರಚ್ಛೇದ; ಮೌನ ಮುರಿದ ಡೊನಾಲ್ಡ್‌ ಟ್ರಂಪ್‌, ಅಕ್ರಮ ವಲಸಿಗರ ವಿರುದ್ಧ ಸಮರ - chandramouli-nagamallaiah-texas-beheading-donald-trump-reacts-illegal-cuban-immigrant - vijaykarnataka